🌹ದೇವೀ ಪೂಜೆ-4🌹: ಭಕ್ತಿಯಿಂದ "ಜಗನ್ಮಾತೆ" ಶಕ್ತಿ, ಅನುಗ್ರಹ ಪಡೆಯುವ ಮಾರ್ಗ0
Jai Srimatha Jai Srimatha
101K subscribers
20,026 views
557

 Published On Jul 1, 2021

🧎🏻‍♂️ನಮಸ್ಕಾರ:-

ಜ್ಞಾನರೂಪಳೆ ಜಯತು ಜಯತು ಜ್ಞಾನಭೋದೆ|
ಭಕ್ತವತ್ಸಲೆ ದೇವಿ ಜಯತು ಜಯತು ||
ಜ್ಞಾನಕರ್ಮವು ಭಕ್ತಿಯೆಂಬ ದಾರಿಯೊಳಗೆ|
ನೈಜ ಜ್ಞಾನವನೀವ ತಾಯಿ ಜಯತು ಜಯತು ||24||

🙏ಕೈ ಮುಗಿದು ಕೇಳಿಕೊಳ್ಳುವುದು:-

ನಾನು ಏನನು ಅರಿಯೆ ನೀನು ಎಲ್ಲವನರಿವೆ |
ನಾನು ನನ್ನದಿದೆಂಬ ಭಾವ ಮರೆಸಿ||
ನೀನೀಗಲೆನ್ನ ನಿನ್ನುಡಿಯಲ್ಲಿ ಹಾಕಿಕೋ|
ಡಭಿಮಾನ ಬಿಡುವಂತೆ ಮಾಡು ತಾಯೆ ||25||
ಜಯತು ಕರುಣಾಸಾಂದ್ರೆ ಜಯತು ಮಂಗಳರೂಪೆ
ಜಯತು ಜಯ ಮಹದಾದಿ ಮಾಯೆ ಜಯತು||
ಜಯತು ದೇವರದೇವಿ ಶ್ರೀ ಚಿದಂಬರರೂಪೆ|
ನೀಡು ನೀನೆಗೀಗ ಸಕಲ ಸುಖವ|| 26

🌹ಅಮ್ಮನನ್ನು ಕೇಳಿಕೊಳ್ಳುವುದು :-

ತಪ್ಪುನೆಪ್ಪುಗಳೆಲ್ಲ ಕಾಪಾಡು ತಾಯೆ ನೀ|
ಕ್ಷಮಿಸುತೆನ್ನಪರಾಧ ಸಂಚಯವನು ||
ತಪ್ಪು ಮಾಡದ ಬುದ್ಧಿ ಪಾಲಿಸುತ್ತಲಿ ಎನ್ನ |
ಪೊರೆ ಕರುಣದಾ ಮಾತೆ ದಾತೆ ||27||

🦜ದೇವಿ ಕಣ್ಣಿಗೆ ಕಪ್ಪಿಡುವುದು:ll

ಕಪ್ಪು ದುಃಖವು ಸುಖವಿದೆಂಬ ಭಾವವು ಕಪ್ಪು|
ಜನ್ಮಜನ್ಮಾಂತರದ ಪಾಪ ಕಪ್ಪು||
ಕಪ್ಪು ಬಾಲ್ಯದ ಭ್ರಾಂತಿ ಯೌವನದ ಸುಖದೀಚ್ಛೆ|
ಯಿಂದ ಕೂಡಿದಮನವದದುವೆ ಕಪ್ಪು|| 28||
ಕಪ್ಪೆಚಿಪ್ಪನು ಬೆಳ್ಳಿಯೆಂದು ತಿಳಿವುದೆ ಕಪ್ಪು|
ಕತ್ತಲೆಯು ಬೆಳಕೆಂಬ ಭ್ರಾಂತಿ ಕಪ್ಪು||
ಕಪ್ಪು ಹಗ್ಗದೊಳಿಪ್ ಸರ್ಪರಾಜನ ಭ್ರಾಂತಿ|
ಜಗದಿ ದೇವನ ಕಾಣದಿಹುದೆ ಕಪ್ಪು||29||
ಹರಿಯು ಹರನೆಂತೆಂಬ ಭೇದಭಾವದಿ|
ಲೋಕಕೀಶದೇವನ ಮರೆವುದದುವೆ ಕಪ್ಪು||
ಗುರುದೇವನಂಘ್ರಿ ಪಂಕಜದ ಭಜನೆಯ ಮರೆತು |
ವಾದ ಮಾಡುವ ಬುದ್ಧಿಯದುವೆ ಕಪ್ಪು || 30 ||
ನೀರಿನಿಂದಲೆ ಬೇರೆಯಾಗಿ ತೋರುವ ಗುಳ್ಳೆ|
ರೂಪಬೇಧÀದಿ ನಿಜವ ಮರೆಸುವಂತೆ||
ತೋರಿ ಭ್ರಾಂತಿಯ ನೀವಜಗವೆ ನೀನೆಂತೆಂಬ||
ನಿಜವ ಮರೆಸುವುದದುವೆ ದೊಡ್ಡಕಪ್ಪು ||30||
ಕಪ್ಪದೊಂದೇ ಜಗದಿ ನಾಟ್ಯವಾಡುತ ನರನ |
ಕೋತಿಯಂದದಿ ಕುಣಿಸುತಿರುತಲಿಹುದು ||
ಕಪ್ಪು ಕಣ್ಣನು ಮುಚ್ಚುತೆನ್ನ ಮನವನು ಶತ್ರು|
ದುರ್ಗ ಮಧ್ಯದಿ ಬಂಧಿಸಿಹುದು ತಾಯೆ ||32||
ಇಂತು ತೋರುತ್ತಲೆನ್ನ ಮನವ ಮೋಹಿಪ|
ಕಪ್ಪಿನೊಳಗೆ ಬೆರೆಸುತಲೀಗ ಜ್ಞಾನರಸವ||
ಸಂಪಸದಿ ಕಾಡಿಗೆಯ ಮಾಡಿ ನಾನರ್ಪಿಸುವೆ |
ಕಂಜಲೋಚನೆ ನಿನ್ನ ನೇತ್ರಯುಗಕೆ|| 33||
🌺☘️🌺☘️🌺☘️🌺☘️🌺☘️
ಅಪ್ಪಾಜಿಯವರ ಮಾರ್ಗದರ್ಶನ:-
ಜಗನ್ಮಾತೆ ಸೇವೆಯಲ್ಲಿ
ಹೇಮಾ ವಿಜಯಕುಮಾರ್
+91 98454 58792
ಸಂಗಮೇಶ ಭಾರದ್ವಾಜ್
+91 83174 45010
ಕಾರ್ತಿಕ್ ಭಾರದ್ವಾಜ್
+91 77604 04626

show more

Share/Embed