Published On Apr 27, 2020
#shivamgurukula #homa #pooja #agnimukaprayogakannada
ಅಗ್ನಿಮುಖ ಪ್ರಯೋಗ.
ಅಗ್ನಿ ಮುಖ ಪ್ರಯೋಗವು ಹೋಮಗಳಲ್ಲಿ ಆಚರಿಸುವ ಪುರ್ವಾಂಗ ಕ್ರಿಯೆಯಾಗಿದ್ದು ಇದು ತುಂಬಾ ಅರ್ಥಗರ್ಬಿತವಾಗಿದೆ .
ಮನುಷ್ಯನಿಗೆ ಹೇಗೆ ಸಂಸ್ಕಾರಾದಿಗಳನ್ನು ಮಾಡುತ್ತೇವೆಯೋ ಹಾಗೆಯೇ ಅಗ್ನಿಗೂ ಸಹಾ ಸಂಸ್ಕಾರಗಳನ್ನು ಮಾಡಿ ಅನಂತರ ಆಹುತಿಯನ್ನು ಅರ್ಪಿಸಬೇಕಾಗುತ್ತದೆ.
ಈ ಅಗ್ನಿಮುಖ ಪ್ರಯೋಗದಲ್ಲಿ ಅಗ್ನಿಗೆ ಆಹುತಿಯಾಗಿ ಬಳಸುವ ಆಜ್ಯ, ಇದ್ಮ, ಸಮಿತ್ತು, ಚರು, ಇತ್ಯಾದಿಗಳನ್ನು ಸಂಸ್ಕರಿಸಿ ಸುದ್ದಿಗೊಳಿಸಿಕೊಳ್ಳುವಂತಹ ಕ್ರಮ ಇರುತ್ತದೆ..
ಅಗ್ನಿಮುಖದಲ್ಲಿ ಬ್ರಹ್ಮ ಸ್ಥಾಪನೆ ವಿಶೇಷವಾದ ಕ್ರಿಯೆ ಯಾಗಿರುತ್ತದೆ, ಎಂದರೆ ಹೋಮದ ಸಮಯದಲ್ಲಿ ಏನಾದರು ಅಪಚಾರಗಳು ಆದಲ್ಲಿ ಅದನ್ನು ಗುರುತಿಸಿ ಆಚಾರ್ಯಾರಿಗೆ ತಿಳಿಸುವುದರ ಮುಖಾಂತರ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಬ್ರಹ್ಮನ ಕರ್ತವ್ಯವಾಗಿರುತ್ತದೆ.
ಒಟ್ಟಾರೆ ಹೇಳಬೇಕೆಂದರೆ ಹೋಮ ಮಾಡುವಾಗ ಪ್ರದಾನ ದೇವತೆಗಳಿಗೆ ಆಹುತಿ ಕೊಡುವ ಮುನ್ನ ಆಹುತಿ ದ್ರವ್ಯ, ಹೋಮದ ಪರಿಕರಗಳು, ಆಚಾರ್ಯಾ, ಬ್ರಹ್ಮ ಇತ್ಯಾದಿಗಳನ್ನು ಕ್ರಮಬದ್ದವಾಗಿ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮಕ್ಕೆ ಅಗ್ನಿಮುಖ ಎಂದು ಕರೆಯಲಾಗುತ್ತದೆ..