Published On May 17, 2022
ಮೂಡುವೇಣುಪುರದ ಶ್ರೀ ವೆಂಕಟರಮಣ ಭಜನಾ ಮಂಡಳಿಯು ಅರವತ್ತು ಸಂವತ್ಸರಗಳು ಪೂರೈಸಿದ ಶುಭ ಅವಸರದಲ್ಲಿ
ಶ್ರೀ ಮೂಡುವೇಣುಪುರದೊಡೆಯನ ಸನ್ನಿಧಿಯಲ್ಲಿ, ಶುಭಕ್ರತ್ ನಾಮ ಸಂವತ್ಸರದಲ್ಲಿ ಜರಗುವ ಭಜನಾ ಸಪ್ತಾಹದ ಸಂದರ್ಭದಲ್ಲಿ, ಭಕ್ತ ಜನರಿಗೆ ಮೂಡುವೇಣುಪುರದೊಡೆಯ ಶ್ರೀ ವೆಂಟರಮಣನ ದಿವ್ಯ ದರ್ಶನದೊಂದಿಗೆ, ಭಜನಾ ಪ್ರಿಯನಾದ ಪಂಡರಾಪುರ ವಿಠ್ಠಲನ ದರ್ಶನವೂ ಸಿಗಲಿ ಎಂಬ ಸದಿಚ್ಚೆಯೊಂದಿಗೆ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಯುವ ಸದಸ್ಯರು ಒಟ್ಟುಗೂಡಿ ಶ್ರೀ ದೇವರಲ್ಲಿ ಪ್ರಾರ್ಥನೆಯನ್ನಿಟ್ಟು, ಪಂಢರಾಪುರದ ವಿಠ್ಠಲನ ಮೂರ್ತಿಯನ್ನು ನಿರ್ಮಿಸಲು ಮುಂದಾದೆವು. ಶ್ರೀ ದೇವರ ಅನುಗ್ರಹ ಸಹಿತ, ಬಹಳ ಉತ್ಸಾಹದಿಂದ ಪ್ರಾರಂಭಿಸಿದ ಈ ಸತ್ಕಾರ್ಯದ ಫಲವಾಗಿ, ಶ್ರೀ ದೇವರ ಮೂರ್ತಿಯು ಅತ್ಯದ್ಭುತವಾಗಿ ಮೂಡಿ ಬಂದಿದ್ದು ನಮ್ಮ ಸೌಭಾಗ್ಯವೇ ಸರಿ. ಮೂರ್ತಿ ಕಾರ್ಯದ ಸಂಗ್ರಹಿತ ದೃಶ್ಯಾವಳಿಗಳನ್ನು ಈ ವಿಡಿಯೋದಲ್ಲಿ ಜೋಡಿಸಿ ಪ್ರದರ್ಶಿಸಲಾಗಿದೆ.
show more