THE WOMAN IS FURIOUS/ನಮ್ಮೂರಿಗೆ ಬಸ್‌ ನಿಲ್ಲಿಸದಿದ್ದರೆ ಕಲ್ಲು ತಗೊಂಡು ಹೊಡಿತೀವಿ: ಸಚಿವರೆದುರು ಮಹಿಳೆ ರೋಷಾವೇಷ.
SAMAGRA KARNATAKA SAMAGRA KARNATAKA
3.81K subscribers
273 views
5

 Published On Oct 5, 2024

THE WOMAN IS FURIOUS/ನಮ್ಮೂರಿಗೆ ಬಸ್‌ ನಿಲ್ಲಿಸದಿದ್ದರೆ ಕಲ್ಲು ತಗೊಂಡು ಹೊಡಿತೀವಿ: ಸಚಿವರೆದುರು ಮಹಿಳೆ ರೋಷಾವೇಷ. ನಮ್ಮೂರಿಗೆ ಬಸ್ ನಿಲ್ಲಿಸದಿದ್ದರೆ ಬಸ್ ಗೆ ಕಲ್ಲುತಗೊಂಡು ಹೊಡೀತಿವಿ ಅಂತಾ ಮಹಿಳೆಯೊಬ್ಬರು ಸಚಿವರೆದುರು ರೋಷಾವೇಷ ವ್ಯಕ್ತಪಡಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ಕಮಲವ್ವ ಎಂಬ ಮಹಿಳೆ ರೋಷಾವೇಷ ವ್ಯಕ್ತಪಡಿಸಿದ್ದಾಳೆ. ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮಕ್ಕೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಸುಮಾರು ವರ್ಷಗಳಿಂದ ನಮ್ಮ ಊರಿಗೆ ಬಸ್ ನಿಲ್ಲಿಸಿ ಜನರನ್ನು ಹತ್ತಿಸಿಕೊಂಡು ಹೋಗ್ರಿ ಎಂದರೂ ಕೇಳುತ್ತಿಲ್ಲ. ಶಾಲಾ‌ ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಬಸ್ಸಿನ ಸಮಸ್ಯೆ ಆಗುತ್ತಿದೆ. ನಮ್ಮ ಊರಿಗೆ ಬಸ್ ನಿಲ್ಲಿಸಿ ಇಲ್ಲದಿದ್ದರೆ ಬಸ್ಸಿಗೆ ಕಲ್ಲು ತಗೊಂಡು ಹೊಡಿತೀವಿ ಎಂದು ಆಕ್ರೋಶ ಹೊರಹಾಕಿದ್ದಾಳೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ಎದುರೇ ಮಹಿಳೆ ಈ ರೀತಿ ರೋಷಾವೇಷ ಹೊರಹಾಕಿದ್ದಾಳೆ. ಮಹಿಳೆಯ ರೋಷಾವೇಷ ಕಂಡ ಸಚಿವ ಶಿವಾನಂದ ಪಾಟೀಲರು, ಏ ಹಂಗೆಲ್ಲ ಮಾಡಬಾರದಮ್ಮಾ. ನಾನು ಬಸ್ ಬಿಡಿಸ್ತೀನಿ ಎಂದು ಸರಿಯಾದ ಬಸ್ಸಿನ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

show more

Share/Embed