Published On Mar 25, 2024
Kallu Devastana Kerekatte/ಕಲ್ಲು ದೇವಸ್ಥಾನ ಕೆರೆಕಟ್ಟೆ/ಕೆಳದಿ ಸಂಸ್ಥಾನ ಕಾಲದ ಶಿವದೇಗುಲ #devastana #shringeri #history #karnataka
ಕಲ್ಲು ದೇವಸ್ಥಾನ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿದೆ,ಇದು ಕುದುರೆಮುಖ ಅಭಯರಣ್ಯಕ್ಕೆ ಒಳಪಟ್ಟ ಪ್ರದೇಶ, ದೇಗುಲದ ಹತ್ತಿರದಲ್ಲಿ ಕೇವಲ ನಾಲ್ಕು ಕುಟುಂಬ ಅಷ್ಟೇ ಇದೆ, ಅದು ಕೂಡ ಕೆಲವಾರು ವರ್ಷಗಳು ಮಾತ್ರ ಎಂದು ಇಲ್ಲಿ ಇರುವರು ಹೇಳುತ್ತಾರೆ, ಇಲ್ಲಿನ ಗತವೈಭವದ ನೆನಪಿಗಾಗಿ ಈ ವಿಡಿಯೋ,ತುಂಗನದಿ ತಟದಲ್ಲಿರುವ ಶಿವ ದೇಗುಲವು ಕೆರೆಕಟ್ಟೆಯಿಂದ ಸ್ವಲ್ಪ ದೂರ ಕಾಡು ದಾರಿ ಕ್ರಮಿಸಿದ ಮೇಲೆ ಸಿಗುತ್ತದೆ, ಪ್ರವಾಸಿಗರಿಗೆ ಇಲ್ಲಿ ಅನುಮತಿ ಸಿಗುವುದು ಕಷ್ಟ ಇರಬಹುದು ನಾವು ನಮ್ಮ ಗೆಳೆಯ ಅಕ್ಷಯ್ ಅವರ ಮನೆಗೆ ಹೋಗುವ ದಾರಿಯಲ್ಲಿ ಈ ದೇವಸ್ಥಾನವು ಸಿಗುವುದರಿಂದ ಹಾಗೆ ಸ್ವಲ್ಪ ವಿಡಿಯೋ ಮಾಡಿ ಮಾಹಿತಿ ಕಲೆ ಹಾಕಿದೆವು, ವಿಡಿಯೋದಲ್ಲಿ ನಾವು ಹೇಳಿರುವ ಮಾಹಿತಿ ಕೆಲವಷ್ಟು ಪುರಾವೆ ಸಹಿತವಾಗಿ ಇದೆ, ಇನ್ನು ಕೆಲವು ನಮ್ಮ ಊಹೆ ಅಷ್ಟೇ, ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಲಭ್ಯ ಇದ್ದರೆ ನಮಗೆ ತಿಳಿಸಬಹುದು, ಹಾಗೆ ನಿಮ್ಮ ಸಲಹೆ ಸೂಚನೆಗಳನ್ನು ನಮಗೆ ಕಮೆಂಟ್ ಮಾಡಬಹುದು..
@Karmaguru.infotainment